Sunday, March 27, 2011

ನಾವು (ಭಾರತೀಯರು) ಭಾರತೀಯರೇ?

We (Indians) are we? First read then think.

Summary: In this article, the author examins the concept of Unity in diversity of India, and he carefully observes some threats to the integrity of United India.

ನಾವು (ಭಾರತೀಯರು) ಭಾರತೀಯರೇ? ಯೋಚಿಸಿ,; ಈಕೆಳಗಿನ ಸಂಭಾಷಣೆ ಓದಿ.

ಒಮ್ಮೆ ಒಬ್ಬ ಅಮೆರಿಕನ್ ಪ್ರಜೆ ಭಾರತಕ್ಕೆ ಬಂದಿದ್ದನು. ಅವನು ಭಾರತದ ಉದ್ದಗಲಕ್ಕೂ ಪ್ರವಾಸ ಮಾಡಿ ಇಲ್ಲಿನ ಸೌಂದರ್ಯವನ್ನು ಸವಿದನು. ಅದರ ಜೊತೆಯಲ್ಲಿಯೇ ಆಯಾ ಸ್ಥಳಗಳ ಕುರಿತು ಸ್ಥಳ ಚರಿತ್ರೆ, ಸಂಬಂಧಪಟ್ಟ ಪೌರಾನಿಕ ಹಿನ್ನೆಲೆ, ಮತ್ತು ಆ ಸ್ಥಳದ ಈಗಿನ ಮಹತ್ವ ಹೀಗೆ ಆ ಸ್ಥಳಗಳ ಬಗ್ಗೆ ಅಗತ್ಯ ಮಾಹಿತಿ ಕಲೆಹಾಕಿದನು. ಅವನಿಗೆ ಭಾರತದ ಅಗಾಧ ಪ್ರಾಕೃತಿಕ ಹಾಗು ಮಾನವ ಸಂಪನ್ಮೂಲದ ಬಗೆಗೂ ಅಪಾರ ಮಾಹಿತಿ ದೊರಕಿತು. ಅವನು ಭಾರತ ಪ್ರವಾಸ ಮುಗಿಸಿ ಸಂತೃಪ್ತನಾಗಿ ತನ್ನ ತಾಯ್ನಾಡಿಗೆ ಮರಳಿದನು. ಒಂದು ದಿನ ಅಮೇರಿಕಾದಲ್ಲಿ ಅವನಿಗೆ ಅವನ ಒಬ್ಬ ಭಾರತೀಯ ಸ್ನೇಹಿತ ಸಿಕ್ಕಿದನು. ಸ್ನೇಹಿತ: ‘ನಮ್ಮ ದೇಶ ಹೇಗಿದೆ?‘ ಅಮೆರಿಕನ್: ‘ಭಾರತ ಒಂದು ಸುಂದರ ಹಾಗು ಸಮೃದ್ಧ ದೇಶ. ಪ್ರಾಕೃತಿಕ ಮತ್ತು ಮಾನವ ಸಂಪನ್ಮೂಲಗಳಿಂದ ಸಂಪದ್ಭರಿತವಾಗಿದೆ; ಅಲ್ಲದೇ ಅತ್ಯಂತ ಶ್ರೀಮಂತ ಪುರಾತನ ಇತಿಹಾಸವನ್ನೂ ಹೊಂದಿದೆ.‘ ಈ ಮಾತು ಕೇಳಿ ಆ ಭಾರತೀಯ ಸ್ನೇಹಿತನಿಗೆ ತುಂಬಾ ಸಂತೋಷವಾಯಿತು. ಆಗ ಅವನು ಹೆಮ್ಮೆಯಿಂದ ‘ಭಾರತೀಯರ ಬಗ್ಗೆ ನಿನ್ನ ಅಭಿಪ್ರಾಯವೇನು?‘ ಅದಕ್ಕೆ ಅಮೆರಿಕನ್ ಆಶ್ಚರ್ಯದಿಂದ ‘ಭಾರತೀಯರು!? ಅವರು ಯಾರು? ನನಗೆ ಒಬ್ಬ ಭಾರತೀಯನು ಸಿಕ್ಕಲಿಲ್ಲ!‘ ಎಂದನು. ಅದಕ್ಕೆ ಸ್ನೇಹಿತ: ‘ಇದೇನಿದು ನಿನ್ನ ಹುಚ್ಚಾಟ? ಭಾರತದಲ್ಲಿ ಭಾರತೀಯರಲ್ಲದೇ ಬೇರೆ ಯಾರು ನಿನಗೆ ಸಿಗಲು ಸಾದ್ಯ?‘ ಎಂದು ತುಸು ಗಡುಸಾಗಿಯೇ ಕೇಳಿದನು. ಅದಕ್ಕೆ ಅಮೆರಿಕನ್ ಶಾಂತವಾಗಿಯೇ, ‘ಕಾಶ್ಮೀರದಲ್ಲಿ ಕಾಶ್ಮೀರಿ, ಪಂಜಾಬಿನಲ್ಲಿ ಪಂಜಾಬಿ, ಬಿಹಾರದಲ್ಲಿ ಬಿಹಾರಿ, ಮಹಾರಾಷ್ಟ್ರದಲ್ಲಿ ಮರಾಠ, ರಾಜಸ್ಥಾನದಲ್ಲಿ ಮಾರ್ವಾಡಿ, ಬಂಗಾಳದಲ್ಲಿ ಬಂಗಾಳಿ, ತಮಿಳುನಾಡಿನಲ್ಲಿ ತಮಿಳ, ಕರ್ನಾಟಕದಲ್ಲಿ ಕನ್ನಡಿಗ; ಇವರೆಲ್ಲರ ಜೊತೆ ಒಬ್ಬ ಹಿಂದೂ, ಮುಸಲ್ಮಾನ, ಸಿಖ್, ಕ್ರೈಸ್ತ, ಜೈನ, ಹೀಗೆ ಅನೇಕರನ್ನು ನೋಡಿದೆ; ಆದರೆ ನೀನು ಹೇಳಿದ ಭಾರತೀಯರು ಮಾತ್ರ ಯಾರೂ ಸಿಗಲಿಲ್ಲ.

ಮೇಲಿನ ಸಂಭಾಷಣೆ ಎಷ್ಟು ಗಂಭೀರವಾಗಿದೆ ಎಂದು ಒಮ್ಮೆ ಯೋಚಿಸಿ ನೋಡಿ. ಇದು ಸತ್ಯವಲ್ಲವೇ? ಭಾರತದ ಈಗಿನ ಪರಿಸ್ಥಿತಿ ಹೀಗಾಗಿರಲು ಏನು ಕಾರಣ ಎನ್ನುವುದು ನಮಗೆ ನಿಮಗೆಲ್ಲರಿಗೂ ಗೊತ್ತೇ ಇದೆ. ಒಂದು ಕಡೆ ನಾವು ವೈವಿಧ್ಯತೆಯಲ್ಲಿ ಏಕತೆ ಇರುವ ರಾಷ್ಟ್ರ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತೇವೆ. ಆದರೆ ನಮ್ಮ ದುರದೃಷ್ಟಕ್ಕೆ ಬರೀ ವೈವಿಧ್ಯತೆ ಮಾತ್ರ ಉಳಿದುಕೊಂಡು ಏಕತೆ ಕಡಿಮೆಯಾಗುತ್ತಿದೆ. ಇದಕ್ಕೆ ಇಂಥದ್ದೇ ಕಾರಣ ಎಂದು ಹೇಳುವುದು ಕಷ್ಟವಾದರೂ ನಮ್ಮಲ್ಲಿ ಹೆಚ್ಚುತ್ತಿರುವ ಪ್ರಾಂತೀಯತೆ, ದುರಭಿಮಾನ, ಮತಾಂಧತೆ, ಹಾಗು ಬ್ರಿಟೀಶರು ಬಿತ್ತಿ ಹೋದ ಒಡೆದು ಆಳುವ ನೀತಿ ನಮ್ಮ ರಾಜಕಾರಣಿಗಳಲ್ಲಿ ಬೆಳೆದು ಹೆಮ್ಮರವಾಗಿರುವುದು; ಹೀಗೆ ಹತ್ತು ಹಲವು ಕಾರಣಗಳಿವೆ. ಇದೆಲ್ಲದರ ಬಲಿಪಶುಗಳು ನಾವು ಅಂದರೆ ಭವ್ಯ್ಅ ಭಾರತದ ಸಾಮಾನ್ಯ ಪ್ರಜೆಗಳಾಗುತ್ತಿದ್ದೇವೆ. ಈ ಕಾರ್ಯಕ್ಕೆ ಕೆಲವು ಮತಾಂಧ ಬಾಹ್ಯ ಮತ್ತು ಆಮ್ತರಿಕ ಶಕ್ತಿಗಳೂ ಕುಮ್ಮಕ್ಕು ನೀಡುತ್ತಿವೆ. ಇದೆಲ್ಲವುಗಳಿಂದ ಭಾರತಕ್ಕೆ ಮತ್ತು ಭಾರತೀಯರಿಗೆ ನಷ್ಟವಲ್ಲವೇ? ಆದ್ದರಿಂದ ನಾವು ನೀವೆಲ್ಲರೂ ಮೊದಲು ಭಾರತೀಯರಾಗೋಣ, ನಂತರ ನಮ್ಮ ನಮ್ಮ ಪ್ರಾಂಥ್ಯದವರು ಹಾಗು ಧರ್ಮದವರು, ಅಲ್ಲವೇ?

Translated from an email, some parts have been removed due to sentiments. ©(C) The author.

No comments:

Post a Comment