Sunday, April 29, 2012

ಒಂದು ಸೂಚನೆ

ಸ್ನೇಹಿತರೇ, ನಿಮಗೆಲ್ಲರಿಗೂ ನನ್ನ ನಮಸ್ಕಾರಗಳು. ಬಹಳ ದಿನಗಳನಂತರ ನಾನು ಮತ್ತೆನನ್ನ ಬ್ಲಾಗಿನಲ್ಲಿ ಬರೆಯುತ್ತಿದ್ದೇನೆ. ಕಾರ್ಯದ ಒತ್ತಡ, ಹಾಗು ಕೆಲವು Commitmentಗಳು ಇದ್ದ ಕಾರಣ ನಾನು ಬ್ಲಾಗ್ ಬರಹದಿಂದ ದೂರವಿದ್ದೆ. ಆದರೆ ನನ್ನ ಓದುಗರನ್ನು ನೆನಪಿಸಿಕೊಂಡು ತುಸು ಬಿಡುವು ಮಾಡಿಕೊಂಡು ಇಲ್ಲಿ ಬಂದು ಬರೆಯುತ್ತಿದ್ದೇನೆ. ಇದರಿಲಿ, ನೀವೆಲ್ಲರೂ ಸೌಖ್ಯವಾಗಿದ್ದೀರೆಂಬ ನಂಬಿಕೆ ನನ್ನದು. ಸುಮಾರು ಮೂರು-ನಾಲ್ಕು ತಿಂಗಳುಗಳ ಕಾಲ Software developmentನ ತರಬೇತಿಯನ್ನು ಬೆಂಗಳೂರಿನಲ್ಲಿ ಪಡೆದು ಈಗ ನನ್ನ ಪದವಿ ತರಗತಿಗಳ ಪರೀಕ್ಷೆಯನ್ನು ಎದುರಿಸುತ್ತಿದ್ದೇನೆ. ಆದರೆ ನಿಮ್ಮೆಲ್ಲರ ನೆನಪು ನನ್ನನ್ನು ಮತ್ತೆ ಬರೆಯುವಂತೆ ಪ್ರೇರೇಪಿಸಿತು. ಇರಲಿ, ಇನ್ನು ಮುಂದೆ ಈ ಬ್ಲಾಗಿನ ಜೊತೆಗೆ ನನ್ನ ಲೇಖನಗಳು ಬೇಳೂರು ಸುದರ್ಶನ ಅವರ ಮಿತ್ರ ಮಾಧ್ಯಮ ಜಾಲ ತಾಣದಲ್ಲಿ ’ಒಳಗಣ್ಣು’ ಎಂಬ ಹೆಸರಿನ ಅಂಕಣದಲ್ಲಿ ಪ್ರಕಟವಾಗುತ್ತಿವೆ. ಅವನ್ನೂ ಓದಿ, ನಿಮ್ಮ ಪ್ರತಿಕ್ರಿಯೆಗಳನ್ನು ನೀಡಿ ಎಂದು ನಿಮ್ಮಲ್ಲಿ ವಿನಂತಿಸಿಕೊಳ್ಳುತ್ತೇನೆ. ನನಗೆ ಲೇಖನಗಳನ್ನು ಬರೆಯಲು ಪ್ರೋತ್ಸಾಹಿಸಿದ ಎಲ್ಲರಿಗೂ, ವಿಶೇಷವಾಗಿ ನನಗೆ ಸ್ಫೂರ್ತಿ ತುಂಬಿ ನನಗೆ ವೇದಿಕೆಯನ್ನು ಒದಗಿಸಿಕೊಡುತ್ತಿರುವ ಭೇಳೂರೂ ಸುದರ್ಶನ ಅವರಿಗೆ ನಾನು ಚಿರಋಣಿ.

No comments:

Post a Comment